

28th January 2025

ಮೇಗಳಾಪುರ ಶಾಲೆಗೆ ಸಮವಸ್ತç, ಡ್ರಂ ಸೆಟ್ ಕೊಡುಗೆ ನೀಡಿದ ದಾನಿಗಳು
ಮಳವಳ್ಳಿ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗಳಪುರ ಶಾಲೆಯಲ್ಲಿ ಪೋಷಕರು ಹಾಗೂ ಶಿಕ್ಷಕರು ೭೬ನೇ ಗಣರಾಜ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಗ್ರಾಮ ಪಂಚಾಯತಿ ಸದಸ್ಯ ವೀರಸ್ವಾಮಿ ಡ್ರಮ್ ಸೆಟ್ ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳು ಚೆನ್ನಾಗಿ ವಿದ್ಯೆಯನ್ನು ಕಲಿತು ಈ ದೇಶದ ಉತ್ತಮ ಪ್ರಜೆಯಾಗಬೇಕೆಂದು ಕರೆ ನೀಡಿದರು.
ಶಾಲಾ ಮಕ್ಕಳಿಗೆ ಟ್ರ್ಯಾಕ್ ಸೂಟ್ ಸಮವಸ್ತ್ರ ಹಾಗೂ ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆ ನೀಡುವುದರ ಮೂಲಕ ಶಾಲಾ ಆವರಣದಲ್ಲಿ ರಂಗು ರಂಗಿನ ರಂಗೋಲಿಗಳಿAದ ಸಿಂಗರಿಸಿ ಧ್ವಜಾರೋಹಣ ಮಾಡಲಾಯಿತು. ಗ್ರಾಮದ ಮಹೇಶ್ ರವರು ಮಕ್ಕಳಿಗೆ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದರು ಹಾಗೂ ಇದೇ ಗ್ರಾಮದ ನಿವೃತ್ತ ಶಾಲಾ ಶಿಕ್ಷಕಿ ಶಿವಮ್ಮ ಶಾಲೆಗೆ ಡ್ರಂ ಸೆಟ್ ಕೊಡುಗೆಯಾಗಿ ನೀಡಿದರು. ದಾನಿ ಮಹೇಶ್ ರವರನ್ನು ಎಸ್ಡಿಎಂಸಿ ಅಧ್ಯಕ್ಷರಾದ ಚಂದ್ರಶೇಖರ್ ಅಭಿನಂದಿಸಿದರು.
ಮುಖ್ಯ ಶಿಕ್ಷಕರಾದ ರಾಜು, ಅತಿಥಿ ಶಿಕ್ಷಕರಾದ ಚುಂಚಣ್ಣ, ಸಹ ಶಿಕ್ಷಕಿ ಆರ್ ನಿರ್ಮಲ, ಪೋಷಕರಾದ ಸುರೇಶ್, ನಾಗರಾಜು, ಶೋಭಾ, ಮಹಾಲಕ್ಷ್ಮಿ, ನಾಗರತ್ನ ಪೋಷಕರು ಎಸ್ಡಿಎಂಸಿ ಸದಸ್ಯರುಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬೈಲಹೊಂಗಲ: ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾಜಕೀಯ ಜಿದ್ದಾಜಿದ್ದಿನ ಶಕ್ತಿ ಪ್ರದರ್ಶನದಿಂದ ಇಡೀ ರಾಜಧಾನಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿ ಕಡುಬಡತನದಲ್ಲೂ ವರ್ಷವಿಡೀ ಕಷ್ಟಪಟ್ಟು ಓದಿದ ಹತ್ತಾರು ಬಡ ವಿದ್ಯಾರ್ಥಿನಿಯರು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲಾಗದೆ, ಕೊನೆ ಕ್ಷಣದಲ್ಲಿ ನೀಟ್ (NEET) ಮರುಪರೀಕ್ಷೆ ಬರೆಯುವ ಮಹತ್ವದ ಅವಕಾಶವನ್ನು ಕಳೆದುಕೊಂಡು ಪರೀಕ್ಷಾ ಕೇಂದ್ರಗಳ ಮುಂದೆ ಕಣ್ಣೀರು ಹಾಕುತ್ತಿರುವುದು ಅತ್ಯಂತ ಖಂಡನೀಯ, ಈ ವಿದ್ಯಾರ್ಥಿಗಳ ಮರಗು ಕಾಂಗ್ರೆಸ್ ಪಕ್ಷಕ್ಕೆ ತಟ್ಟಲಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣ್ಣಿಕೇರಿ ಶಾಲೆಯಲ್ಲಿ 12 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮಕ್ಕಳಿಂದ ವಿವಿಧ ಯೋಗಾಸನಗಳು ಪ್ರದರ್ಶನ

ನಾಳೆ ಪಿ. ಎನ್. ಗಾಡ್ಗಿಲ್ & ಸನ್ಸ್ ವತಿಯಿಂದ ಚಿತ್ರಕಲ ಸ್ಪರ್ಧೆ ಚಿರಂಜೀವಿ ಮೆಥೋಡಿಸ್ಟ ಆಂಗ್ಲ ಕನ್ನಡ ಮಾಧ್ಯಮ ಪ್ರೌಢ ಶಾಲೆ ಯಾದಗಿರಿ